ನನ್ನ ಕವಿತೆಗಳ ಕದ್ದು ಓದುವುದು
ಅದರ ವಿಷಯವನೆತ್ತಿ ತೂಗುವುದು
ನನ್ನವಳ ಚಟ…
‘ಓದಿದೆನು ನಿನ್ನ ಗೀತೆಗಳ ನಲ್ಲ’
ಎಂದು ಮೋಹಕವಾಗಿ
ಹಿಂಡುವಳು ನನ್ನ ಗಲ್ಲ
ಕನಸಿನಲಿ ಮೆಲ್ಲನೆ ಬಂದು ಮುದ್ದು ಮಾತಿನ
ಭಾವರಸದೊಳಗೆ ಮಿಂದು
ಬೆರೆಸಿ ನಿನ್ನನು, ಮೈ ಮರೆಸಿ
ನನ್ನ ದೂರಿದ ರೂಪಸಿ
ಯಾರೆಂದು ನನಗೆ ಗೊತ್ತು
ನೀನು ಬರೆವುದೆ ಅವಳ ಸುತ್ತು ಮುತ್ತು
ನನ್ನ ಕಣ್ಣಲಿ ನೋಟ
ಮೈಯ ಬಳುಕು, ಮಾಟ
ನಿನಗೆ ಕಾಣುವುದೆ ಇಲ್ಲ
ನನ್ನ ಒನಪು ಒಯ್ಯಾರ
ನಿನ್ನ ಮೆಚ್ಚನು ಬಯಸಿ
ಮಾಡಿದ ಸಿಂಗಾರ
ನಿನ್ನ ಕವಿತೆಗೆ ಸ್ಫೂರ್ತಿಯಾಗುವುದಿಲ್ಲ.
ನಿನಗವಳು ರಾಗಿಣಿ
ಮಧು ಮಾಲಿನಿ ಚಕೋರಿ
ಮೀಂಟಿದರೆ ಸಾಕು ಹೊರಡುತ್ತೆ ಆಲಾಪ
ಸ್ವರಸಂಗಮದ ಮೌನದಲಿ
ಬಿಚ್ಚಿಕೊಳ್ಳುತ್ತೆ ಅನಂತ ಸಲ್ಲಾಪ…
ನಾನು ಹೇಳುತ್ತೇನೆ: ಕರುಬದಿರು ನಲ್ಲೆ
ಕವಿತೆಯಲಿ ಬರುವವಳು ನೀನು
ಅವಳಲಿ ನಿನ್ನನಿಟ್ಟು ನಿನ್ನನು ಅವಳಲಿಟ್ಟು
ನೋಡುವೆನು, ಬರೆಯುವೆನು
ನನ್ನ ಒಲವುಗಳ ಬಗೆಯನರಿಯದೆ
ಕನಸಿನವಳಾರೆಂದು ತಿಳಿಯುವುದು ಹೇಗೆ
ಅದಕೆಂದು ನೀನೆ ನನ್ನ ಕವಿತೆಯ
ಕಲ್ಪನೆಯಾಗು, ಉಸಿರಾಗು
ಹಣತೆಯಲಿ ಉರಿವ ದೀಪದ ಹಾಗೆ!
*****
Related Post
ಸಣ್ಣ ಕತೆ
-
ಎರಡು ಮದುವೆಗಳು
ಮುಂಗಾರು ಮಳೆಗಳು ಸರಿಯಾಗಿ ಬಾರದೇ ಭುವನೇಶ್ವರದ ಹಳ್ಳಿಯ ಜನರಲ್ಲಿ ಒಂದು ರೀತಿಯ ಕಳವಳವಾಗಿತ್ತು. ಮಳೆ ಬಂದರೆ ಬೆಳೆ, ಬೆಳೆ ಆದರೆ ಬಾಳು ಎಂದು ಬದುಕುತ್ತಿದ್ದ ಅವರಿಗೆ ಏನು… Read more…
-
ಸ್ನೇಹಲತಾ
೧೫-೯-೧೯.. ಈಗ ಮನಸ್ಸಿಗೆ ನೆಮ್ಮದಿಯೆನಿಸುತ್ತಿದೆ. ಇಂದಿನಿಂದ ಮತ್ತೆ ನನ್ನ ದಿನಚರಿ ಬರೆಯುವ ಕಾರ್ಯಕ್ರಮವನ್ನು ಆರಂಭಿಸಬೇಕು. ದಿನಚರಿಯೆ ನನ್ನ ಸಹಧರ್ಮಿಣಿ; ನನ್ನ ಸಹ-ಸಂಚಾರಿ; ಅದೆ ನನಗೆ ಸಂತಸ ಕೊಡುವುದು.… Read more…
-
ಗುಲ್ಬಾಯಿ
ನಮ್ಮ ಪರಮಮಿತ್ರರಾದ ಗುಂಡೇರಾವ ಇವರ ನೇತ್ರರೋಗದ ಚಿಕಿತ್ಸೆ ಗಾಗಿ ನಾವು ಮೂವರು ಮಿರ್ಜಿಯಲ್ಲಿರುವ ಡಾಕ್ಟರ ವಾಲ್ನೆಸ್ ಇವರ ಔಷಧಾಲಯಕ್ಕೆ ಬಂದಿದ್ದೆವು. ಗುಂಡೇರಾಯರು ಹಗಲಿರುಳು ಔಷಧಾಲಯದಲ್ಲಿಯೇ ಇರಬೇಕಾಗಿರುವದರಿಂದ ಆ… Read more…
-
ವಾಮನ ಮಾಸ್ತರರ ಏಳು ಬೀಳು
"ಏಳು!" ಅಂದರು ವಾಮನ ಮಾಸ್ತರರು. ರಾಜಪ್ಪ ಏಳಲಿಲ್ಲ. ಎಂದಿನಂತೆ ಕಿಟಿಕಿಯ ಹೊರಗೆ ಹೆದ್ದಾರಿಯಲ್ಲಿ ಹೋಗುತ್ತಿದ್ದ ವಾಹನಗಳನ್ನೂ ದಾರಿಹೋಕರನ್ನೂ ನೋಡುತ್ತ, ಡೆಸ್ಕಿನ ಮೇಲೆ ಬಲಗೈಯ ಸೊಂಟು ಊರಿ, ಕೈಯಮೇಲೆ… Read more…
-
ಮೌನವು ಮುದ್ದಿಗಾಗಿ!
ಮೋಹನರಾಯರು ರಗ್ಗಿನ ಮಸಕು ತೆಗೆದು ಸುತ್ತಲೂ ನೋಡಲು ಇನ್ನೂ ಎಲ್ಲವೂ ಶಾಂತವಾಗಿಯೇ ಇದ್ದಿತು. ಬೆಳಗಿನ ಜಾವವು ಜಾರಿ, ಸೂರ್ಯನು ಮೇಲಕ್ಕೇರಿದುದು ಅವರಿಗೆ ಅರಿವೇ ಇರಲಿಲ್ಲ. ಅಷ್ಟು ಗಾಢ… Read more…